Friday, 20 November 2015

ಪವಿತ್ರ ಪತ್ರಿಕೋದ್ಯಮಕ್ಕೊಂದು ಶಕ್ತಿ ಇದೆ - ನಂಬಿಕೆ ಕಳೆದುಕೊಳ್ಳಬೇಡಿ. ಟಿ. ಆರ್.ಪಿಗೂ ಮಿಗಿಲಾದದ್ದೂ ಇದೆ.. ಪ್ರಯತ್ನ ಮಾಡಿ.

"ಹುಚ್ಚರ ಸಂತೆ"ಯಲ್ಲಿ ಹೀಗೊಂದು ಚರ್ಚೆ
-----------------------------------------

ಟಿ. ಆರ್. ಪಿ.ಗೂ ಮೀರಿದ್ದೂ ಇನ್ನೊಂದಿದೆ.
ಅಕ್ಸಿಜನ್ ಇಲ್ಲದೇ ಪತ್ರಿಕೋದ್ಯಮವೇ ಇಲ್ಲ ಎಂಬ ಭ್ರಮೆಯಲ್ಲಿರುವವರಿಗೆ
ಅದನ್ನೂ ಮೀರಿದ ಸಾಮಾಜಿಕ ಕರ್ತವ್ಯವೂ ಇದೆ

ನಿಮ್ಮ ಟೀಕೆಗೆ ಕಿವಿಯಾಗಿ, ಬದಲಾಗುತ್ತೇವೆ.
" ಎಸ್." ಅದ್ಭುತವಾದ ವಿಷಯ. ಮಾಧ್ಯಮಲೋಕದಲ್ಲಿ ಇಂತಹದ್ದೊಂದು ಪ್ರಯತ್ನ ನಡೆದಿರಲಿಲ್ಲ.
ಅದನ್ನು ಪಬ್ಲಿಕ್ ಟಿವಿಯ ಮಿತ್ರರು ಆಯೋಜಿಸಿದ್ದರು. ಹುಚ್ಚ ವೆಂಕಟ್ ಗೆ ಧನ್ಯವಾದಗಳು.


ಸಾಮಾಜಿಕ ಕಳಕಳಿಗಾಗಿಯೇ ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ನಡೆಸುತ್ತೇವೆ ಎಂಬುದು ಸುಳ್ಳು.
ಒಂದು ಉದ್ಯಮವಾಗಿ, ವ್ಯವಹಾರಿಕವಾಗಿಯೇ ನಡೆಸುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನೇರ ನುಡಿಯನ್ನು ಅಭಿನಂದಿಸೋಣ.

ಸಂವಿಧಾನದ ನಾಲ್ಕನೇ ಅಂಗವಾಗಿ

ಜನರಿಗಾಗಿ, ಜನರಿಗೋಸ್ಕರ, ಅನ್ಯಾಯದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಧ್ವನಿಯಾಗಿ ಕಾರ್ಯ ನಿರ್ವಹಸುವುದಕ್ಕಾಗಿ ಭಾರತದ ಸಂವಿಧಾನದಲ್ಲಿ
ಶಾಸಕಾಂಗ
ಕಾರ್ಯಾಂಗ
ನ್ಯಾಯಾಂಗದ
ಜೊತೆ
ಪತ್ರಿಕಾರಂಗಕ್ಕೂ
ಒಂದು ಸ್ಥಾನದ ಜೊತೆ, ಸಾಮಾಜಿಕ ಜವಾಬ್ದಾರಿಯನ್ನು ನೀಡಿದೆ.
ಅದನ್ನು ಅರ್ಥ ಮಾಡಿಕೊಂಡಿರುವವರು ಎಷ್ಟು ಜನ ?

ಸಮಯಕ್ಕೆ ತಕ್ಕ ಹಾಗೆ ಸಂಸ್ಕೃತಿ ಬದಲಾಗುತ್ತಿವೆ. ಆಚಾರ ವಿಚಾರಗಳು ಬದಲಾಗುತ್ತಿವೆ. ಮನುಷ್ಯನಲ್ಲಿ ಶಾಂತಿ ಮಾಯವಾಗುತ್ತಾ, ದ್ವೇಷ, ಕೌರ್ಯ, ಸ್ವಾರ್ಥ ಹೆಚ್ಚಾಗುತ್ತಿದೆ.
ಆದರೆ ನೀರು, ಬೆಳಕು, ಗಾಳಿ ಬದಲಾಗಿದೆಯೇ ?

ಬೇರೆಲ್ಲಾ ಬದಲಾದರೂ, ಪ್ರಕೃತಿ ಬದಲಾಗುತ್ತಿಲ್ಲ. ಶಾಸಕಾಂಗ, ಕಾರ್ಯಾಂಗ ಕೆಲವೊಮ್ಮೆ ನ್ಯಾಯಾಂಗ (ಲೋಕಾಯುಕ್ತರ ಹಗರಣ) ತನ್ನ ಹಾದಿ ಬದಲಿಸಿಕೊಂಡಿವೆ
ನಾವು (ಪತ್ರಿಕಾರಂಗವು) ಬದಲಾಗುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರೆ
ಅವರಿಗೂ ನಿಮಗೂ ಏನು ವ್ಯತ್ಯಾಸವಿದೆ ?

ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಚಳುವಳಿಗಳ ಪ್ರಚಾರಕ್ಕಾಗಿ ಪತ್ರಿಕೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು.

ಅಂದು ಕಣ್ಣ ಮುಂದೆ ಇದ್ದಿದ್ದು. ಜಾಗೃತಿ, ಸಂಘಟನೆ ಮತ್ತು ಸ್ವಾತಂತ್ರ್ಯ.
ಇದಕ್ಕಾಗಿ ಪತ್ರಕರ್ತರು ತಮ್ಮನ್ನು ತಾವು ತೊಡಗಿಸಿಕೊಂಡಿರಲಿಲ್ಲವೇ ?

ಆವತ್ತು ಜಗತ್ತಿನಲ್ಲಿ

ನ್ಯಾಯ, ನೀತಿ, ಧರ್ಮಕ್ಕೆ ಜನರು ಅಂಜುತ್ತಿದ್ದರು. ಅಂದಿನ ದಿನಗಳಲ್ಲಿ ಬರೀ ಸುದ್ದಿಗಳಿಗಾಗಿ ಮಾತ್ರವೇ ಪತ್ರಿಕೆಗಳು ಬಳಕೆಯಾಗುತ್ತಿದ್ದವು.

ಆದರೆ ಇಂದಿನ ಯುಗದಲ್ಲಿ
ಅತಿಯಾದ ಭ್ರಷ್ಟಾಚಾರ, ಮೋಸ, ಅನೀತಿ, ಅನ್ಯಾಯ, ಅಧರ್ಮಗಳೇ ತಾಂಡವವಾಡುತ್ತಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ತಮ್ಮ ವೃತ್ತಿಯನ್ನು ಮಾಡಬೇಕಾಗುತ್ತದೆ.

ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಭ್ರಷ್ಟಾಚಾರ ಇದೆ.
ಮೂವತ್ತು ಸಾವಿರದಲ್ಲಿ ಚುನಾವಣೆ ಎದುರಿಸುತ್ತಿದ್ದವರು, ಮೂರು ಕೋಟಿ ಖರ್ಚು ಮಾಡಿ ಚುನಾವಣೆ ಎದುರಿಸುತ್ತಿದ್ದೇವೆ ಎಂಬ ಸತ್ಯವನ್ನು ವಿಧಾನಸಭೆಯ ಸದನದಲ್ಲಿ ಹೇಳಿಕೆ ಕೊಟ್ಟಿದ್ದ ಮಾಜಿ ಸ್ವೀಕರ್, ಶಾಸಕರಾದ ರಮೇಶ್ ಕುಮಾರ್ ರವರು ಪಕ್ಕದಲ್ಲಿಯೇ ಕುಳಿತಿದ್ದಾರೆ.

ಮನಸ್ಸು ಮಾಡಿದರೆ ಸಿ.ಟಿ. ರವಿಯವರು ಒಂದು ಟಿವಿ ಚಾನೆಲ್ ಪ್ರಾರಂಭ ಮಾಡಿಬಿಡುತ್ತಿದ್ದರು ಎಂದು ರಂಗನಾಥರವರೇ ಹೇಳುವ, ಹಿಂದು ಸಂಘಟನೆಗಳಲ್ಲಿ ಕಾರ್ಯಕರ್ತರಾಗಿದ್ದ ಮಾಜಿ ಸಚಿವ, ಶಾಸಕರಾದ ಸಿ. ಟಿ. ರವಿಯವರು ಸಹ ಮತ್ತೊಂದು ಕಡೆ ಕುಳಿತಿದ್ದಾರೆ.

ಲೋಕಸತ್ತಾ ಪಕ್ಷದಿಂದ ಆಮ್ ಆದ್ಮಿಯತ್ತ ಹೊರಳಿ, ದೇಶದಲ್ಲಿ ಬದಲಾವಣೆ ತಂದುಬಿಡುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಿಬಿಡುತ್ತೇವೆ ಎಂದು ಹೊರಟ ಆಮ್ ಆದ್ಮಿ ಪಕ್ಷದ ನೇತಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಪಕ್ಷದ ವಕ್ತಾರರಾಗಿ, ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇತರರಿಗೆ ಹಾದಿ ಮಾಡಿಕೊಟ್ಟ ರವಿಕೃಷ್ಣರೆಡ್ಡಿಯವರೂ ಇದ್ದರು.
ಇವರೆಲ್ಲರೂ ಶಾಸಕಾಂಗದಡಿಯಲ್ಲಿದ್ದಾರೆ.

ಮೂವತ್ತು ಸಾವಿರದಿಂದ ಮೂರು ಕೋಟಿ ಖರ್ಚು ಮಾಡುತ್ತಿದ್ದೇವೆ ಎಂಬ ಸದನದಲ್ಲಿನ ಹೇಳಿಕೆಗಳು ಮಾಧ್ಯಮಗಳ ಕಿವಿಗೆ ಬೀಳುತ್ತಿಲ್ಲ. ಮೂರು ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದವರು ಐದು ವರ್ಷದಲ್ಲಿ ಎಷ್ಟು ಪಟ್ಟು ಹಣ ಗಳಿಸಬಹುದು ?
ಮೂರು ಕೋಟಿ ಹಣ ಹೇಗೆ ಬರುತ್ತೆ ?

ಸಂಘದ ಕಾರ್ಯಕರ್ತರಾದವರು ಟಿವಿ ಚಾನೆಲ್ ಮಾಡುವಷ್ಟು ಎತ್ತರಕ್ಕೆ ಬೆಳೆಯುತ್ತಾರೆ.
ಅವರೇ ಹೇಳುವ ಹಾಗೆ ಅವರ ಪಕ್ಷದ ಟಿಕೆಟ್ ನೀಡಬೇಕಾದರೆ ಎಷ್ಟು ಹಣ ಕೊಡಬಹುದು, ಎಷ್ಟು ಖರ್ಚು ಮಾಡಬಹುದು ಎಂಬ ಆಧಾರದ ಮೇಲೆಯೇ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ ಎಂಬ ಘನ ಘೋರ ಸತ್ಯವನ್ನು ನಿಮ್ಮ ಮುಂದೆಯೇ ಬಿಚ್ಚಿಟ್ಟಿದ್ದು ಟಿವಿ ಮಾಧ್ಯಮಗಳ ಗಮನಕ್ಕೆ ಬರುವುದೇ ಇಲ್ಲ.

ಪ್ರಾಮಾಣಿಕವಾಗಿ, ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷವನ್ನು ಹುಟ್ಟುಹಾಕಿ, ಜನರಿಗಾಗಿ ಚುನಾವಣೆ ಎದುರಿಸಿ, ಆಡಳಿತ ನಡೆಸುತ್ತೇವೆ ಎಂಬ ವಾಗ್ದಾನ ಮಾಡಿದ್ದ ಶ್ರೀ ಅರವಿಂದ ಕೇಜ್ರಿವಾಲರು ಬಿಹಾರದಲ್ಲಿ ಲಾಲೂ ಪ್ರಸಾದರನ್ನು ಅಪ್ಪಿಕೊಳ್ತಾರೆ ಇವುಗಳು ಕಾಣಿಸುವುದಿಲ್ಲ.

ಬಿಗ್ ಬಾಸ್ ನಲ್ಲಿ ಸೋತ ಅರುಣ್ ಸಾಗರ್ ಅವರೇ ಹೇಳುವ ಹಾಗೆ ಟಿ.ಆರ್.ಪಿಗಾಗಿ ತಮ್ಮನ್ನು ಸೋಲುವ ಹಾಗೆ ಮಾಡಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ. ಒಂದು ರಿಯಾಲಿಟಿ ಷೋನ ಮೋಸದ ಜಾಲವು ತಮ್ಮ ಕಣ್ನೇದುರೇ ಅನಾವರಣಗೊಳ್ಳುತ್ತಿದ್ದರೂ, ಜನರಿಗೆ ಮೋಸ ಮಾಡುತ್ತಿದ್ದರೂ, ಅವುಗಳು ಸುದ್ದಿಯೇ ಆಗುವುದಿಲ್ಲ.

1200 ಜನರ ಅಭಿಪ್ರಾಯದ ಟಿ. ಆರ್.ಪಿ.ಯನ್ನು ನಂಬಿಕೊಂಡು ಪವಿತ್ರವಾದ ಪತ್ರಿಕೋದ್ಯಮವನ್ನು ನಡೆಸುತ್ತಿದ್ದೀರಿ ಎಂದಾಯಿತು ?

ನ್ಯೂಸ್ ಚಾನೆಲ್ ಗಳು ಬರುವ ಮುಂಚೆ ಮನರಂಜನೆ ಚಾನೆಲ್ ಗಳು ಇದ್ದವು ಒಂದು ಘಂಟೆ ನ್ಯೂಸ್ ನೋಡುತ್ತಿದ್ದರು. ಪತ್ರಿಕೆಗಳನ್ನು ಓದುತ್ತಿದ್ದರು. ಆಗಲೂ ಜನ ಜೀವಿಸುತ್ತಿದ್ದರು. ಈಗಲೂ ಜನ ಜೀವಿಸುತ್ತಿದ್ದಾರೆ.

ನ್ಯೂಸ್ ಚಾನೆಲ್ ಗಳು ಪ್ರಾರಂಭವಾದ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿತ್ತು.
ಮುದ್ರಣ ಮಾಧ್ಯಮಗಳಿಂದ ದೃಶ್ಯ ಮಾಧ್ಯಮಗಳತ್ತ ಹೊರಳಲಾರಂಭಿಸಿದರು.

ದಯವಿಟ್ಟು ಅರ್ಥ ಮಾಡಿಕೊಳ್ಳಿ ಸಂವಿಧಾನದಲ್ಲಿ ಹೆಚ್ಚಿನ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ.

ನಿಮ್ಮ ಅಕ್ಕ ಪಕ್ಷ ಕೂರಿಸಿಕೊಂಡಿರುವ ರಾಜಕಾರಣಿಗಳು (ಬಹುತೇಕ ಎಲ್ಲಾ ರಾಜಕಾರಣಿಗಳು) ಸಾಮಾನ್ಯ ವ್ಯಕ್ತಿಗಳಾಗಿದ್ದವರೇ...ಅತಿ ಶ್ರೀಮಂತರು ಹೇಗಾದರು?.

ರಾಜಕೀಯಕ್ಕೆ ಬರುವವರು ಸಮಾಜ ಸೇವೆಗೆ ಅಂತಲೇ ಬರುವುದು.
ಸಮಾಜಸೇವೆ ಅವರ ಗುರಿಯಾಗಬೇಕು. ಶಾಸಕರಿಗೆ, ಸಂಸದರಿಗೆ ನಿಗದಿಯಾಗಿರುವ ವೇತನ, ಭತ್ಯೆಗಳಷ್ಟೇ ಬಳಸಿಕೊಂಡು ತಮ್ಮ ಸಾರ್ವಜನಿಕ ಜೀವನ ನಡೆಸಲೇಬೇಕು.
ಅದನ್ನೂ ಮೀರಿ ಕೋಟಿಗಳಿಗೆ ಲೆಕ್ಕವಿಲ್ಲದಷ್ಟು ಆಸ್ತಿ ವೃದ್ದಿಯಾಗುತ್ತಿರುವುದು ಹೇಗೆ ? ಮೂವತ್ತು ಸಾವಿರಗಳಿಂದ, ಮೂರು ಕೋಟಿ ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳುವ ಹಣ ಬರುತ್ತಿರುವುದಾದರೂ ಎಲ್ಲಿಂದ ? ಈ ವಿಷಯಗಳು ಪ್ರಾಮಾಣಿಕ ಪತ್ರಕರ್ತರ ಅರಿವಿಗೆ ಬರುತ್ತಿಲ್ಲವೇ ?

ಶಾಸಕಾಂಗದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಕೂತಿದೆ. ಅದಕ್ಕೆ ಪೂರಕವಾಗಿ
ಕಾರ್ಯಾಂಗದಲ್ಲಿ ಒಬ್ಬ ಜವಾನನಿಂದ ಹಿಡಿದು ಐ.ಎ.ಎಸ್. ಅಧಿಕಾರಿಯವರೆವಿಗೂ ಕೋಟಿ ಕೋಟಿ ಆಕ್ರಮ ಆಸ್ತಿ ಗಳಿಕೆಯಾಗುತ್ತಿದೆ.

ಜನ ಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದ ಸಂಬಳವನ್ನೂ ಪಡೆದುಕೊಳ್ಳುತ್ತಾ, ಜನರ ಮುಂದೆ ಲಂಚ-ಭಿಕ್ಷೆಗಾಗಿ ಕೈಯೊಡ್ಡಿ ತಮ್ಮ ಸಂಸಾರಕ್ಕೆ ಭಿಕ್ಷೆಯ ಊಟ, ಭಿಕ್ಷೆಯಿಂದ ಬಟ್ಟೆ, ಭಿಕ್ಷೆಯಿಂದ ಮನೆ, ಭಿಕ್ಷೆ ಮದುವೆಗಳನ್ನು ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರಲ್ಲ. ಕಾರ್ಯಾಂಗ ಮತ್ತು ಶಾಸಕಾಂಗಗಳು ಪ್ರತಿರೂಪವಾಗಿ ಒಬ್ಬರನ್ನೂ ಒಬ್ಬರು ಮೀರಿಸುವ ಪೈಪೋಟಿಯಲ್ಲಿ ಸಾಗುತ್ತಿದ್ದಾರಲ್ಲ ಇವು ಮಾಧ್ಯಮಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ?

ಆ ಚಾನೆಲ್ ನವರು ಬ್ರೇಕಿಂಗ್ ನ್ಯೂಸ್ ಹಾಕುವ ಮುನ್ನ ನಾವು ಹಾಕಬೇಕು.. ಇವರೇನು ಹೆಡ್ ಲೈನ್ ಕೊಟ್ತಾರೋ ಅದಕ್ಕಿಂತ ಆಕರ್ಷಕ ಹೆಡ್ ಲೈನ್ ಕೊಡಬೇಕು. ಕಾಂಟ್ರೋವಸಿ ಕ್ರೀಯೇಟ್ ಆದ ವ್ಯಕ್ತಿಯ ಹಿಂದೆ ಓಡಿ ,ಕಾಡಿ, ಬೇಡಿ ತಮ್ಮ ತಮ್ಮ ಸ್ಟುಡಿಯೋಗಳಲ್ಲಿ ಕೂರಿಸಿಕೊಂಡು ಬೈದರೂ, ಒದ್ದರೂ, ಸರಿಯೇ ಎರಡೂ ಮೂರು ತಾಸು ಸಮಯ ಹಾಳು ಮಾಡಬೇಕು.

ತಪ್ಪಿದ್ದ್ರೆಹೇಳಿ ಅಂದ್ರಲ್ಲ.
ಬೆಳಗಿನ ಹೊತ್ತು ಹಾದಿ ಬೀದಿ ಜ್ಯೋತಿಷಿಗಳನ್ನು ಕರೆತಂದು ಅವರನ್ನು ಫೋಟೋ, ವಿಡಿಯೋ ಶೂಟ್ ಮಾಡಿಸಿ, ಟಿವಿಯ ಮುಂದೆ ಕೂರಿಸಿ, ಜನರ ಭಾವನೆಗಳ ಜೊತೆ ಚೆಲ್ಲಾಟ ವಾಡುತ್ತಿರುವುದು ತಪ್ಪು ಅಂತ ಅನ್ನಿಸುತ್ತಿಲ್ಲವೇ ?
ಅವರ ಫೋನ್ ನಂಬರ್ ವಿಳಾಸ ಕೊಟ್ಟು ಅವರನ್ನು ನೇರವಾಗಿ ಭೇಟಿ ಮಾಡಲು ಸೂಚಿಸುತ್ತಿರಲ್ಲ ಅದನ್ನು ಏನೆಂದುಕೊಳ್ಳಬೇಕು. ವ್ಯವಹಾರ ಎನ್ನಬೇಕೇ ?
(ನಿಮ್ಮದೇ ಚಾನೆಲ್ ನಲ್ಲಿ ರಾಧ ಹಿರೇಗೌಡ್ರು ಪಿಯುಸಿ ಓದುವ ಹುಡುಗಿ ಪತ್ರಿಕೆಯಲ್ಲಿ ಜಾಹೀರಾತು ನಂಬಿ ಮನೆಯಲ್ಲಿದ್ದ ಚಿನ್ನವನ್ನು ಜ್ಯೋತಿಷಿಗೆ ಕೊಟ್ಟ ಮೋಸವಾಗಿದ್ದ ಪ್ರಕರಣವನ್ನು ಒಂದು ಘಂಟೆ ನಡೆಸಿಕೊಟ್ಟರಲ್ಲ. ಆ ಸಮಯದಲ್ಲಿ ಆ ಬಾಲಕಿಯ ದೊಡ್ಡಪ್ಪ ನೀವು ಚಾನೆಲ್ ನಲ್ಲಿ ತೋರಿಸ್ತೀರಲ್ಲ. ಹಾಗೆಯೇ ಪತ್ರಿಕೆಯನ್ನು ನೋಡಿ ನಂಬಿದ್ದಾಳೆ ಎನ್ನುತ್ತಾರೆ. ) ನಿಮ್ಮ ತಪ್ಪುಗಳು ಕಣ್ಣ ಮುಂದೇನೇ ಇದೆ.

ಟಿ. ಆರ್. ಪಿ. ಗಾಗಿಯೇ ನನ್ನ ಚಾನೆಲ್ ನಡಸಲೇಬೇಕು.
ನಾನು ಓದಿಕೊಂಡಿದ್ದೇನೆ. ನನ್ನ ಕನಸುಗಳನ್ನು ಜನರಿಗೆ ತಲುಪಿಸಬೇಕುಅದಕ್ಕಾಗಿ
ನಾನು ಈ ವಾಹಿನಿ ಆಯ್ಕೆ ಮಾಢಿಕೊಂಡಿದ್ದೇನೆ ಎನ್ನುವ ಶ್ರೀ ಹೆಚ್. ಆರ್. ರಂಗನಾಥ ಎಂಬ ಪತ್ರಕರ್ತರು, ಭಾರತ ದೇಶದ ಸಂವಿಧಾನ ನಮಗೆ ಪವಿತ್ರವಾದ ನಾಲ್ಕನೇ ಅಂಗದ ಜವಾಬ್ದಾರಿ ಯನ್ನು ನೀಡಿದೆ.
ಜನ ಸಾಮಾನ್ಯರ ನೆರವಾಗುವಂತಹ ಕೆಲಸಗಳನ್ನು ಮಾಡೋಣ.
ಈ ಭ್ರಷ್ಟ ವ್ಯವಸ್ಥೆಯಿಂದ ಜನರಿಗೆ ಮುಕ್ತಿಗೊಳಿಸೋಣ.
ಪತ್ರಿಕೋದ್ಯಮದ ಅಸ್ತ್ರ - ಬ್ರಹ್ಮಾಸ್ತ್ರ ನಮ್ಮಲ್ಲಿ ಇದೆ.
ಇವುಗಳಿಂದ ಜನರ ತೆರಿಗೆ ಹಣವನ್ನು ತಿಂದು ತೇಗುತ್ತಿರುವ ಲಂಚ ಭಿಕ್ಷೆ ಬೇಡುತ್ತಿರುವವರ ಮುಖವಾಡವನ್ನು ಕಳಚೋಣ.

ಒಬ್ಬ ಸಾಮಾನ್ಯ ನಾಗರಿಕ, ರೈತನಿಗೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಇಲ್ಲಿ ಯಾವುದೇ ಲಂಚವಿಲ್ಲದೇ ಸರಿಯಾದ ಸಮಯಕ್ಕೆ ಸರ್ಕಾರಿ ಸೇವೆಗಳು ತಲುಪಿಸುವ ಕಡೆ ಭ್ರಷ್ಟರಿಗೆ ಎಚ್ಚರಿಕೆಯ ಘಂಟೆಯಾಗಿ ಮುಂದೆ ನಿಲ್ಲೋಣ.

ಜನರ ತೆರಿಗೆ ಹಣದಿಂದ ಬಿಡುಗಡೆಯಾಗುವ ಅನುದಾನಗಳು ಪೈಸೆ ಪೈಸೆ ಜನರಿಗೆ ತಲುಪುವಂತೆ ಮಾರ್ಗದರ್ಶಿಯಾಗಿ ಜನರ ಮಧ್ಯೆ ನಿಲ್ಲೋಣ.

ಕೆಲಸಕ್ಕೆ ಸೇರಿದಾಗ ಇದ್ದ ಆಸ್ತಿ ಪ್ರಮಾಣಕ್ಕೂ ಏರಿಕೆಯಾಗುವ ಆಸ್ತಿ ಪ್ರಮಾಣಗಳನ್ನು ಪತ್ತೆ ಹಚ್ಚಿ ಮಾಧ್ಯಮಗಳ ಮೂಲಕ ಜನರ ಮುಂದೆ ಇಡೋಣ.
ಮಾಧ್ಯಮಗಳು ಒಂದು ಎಚ್ಚರಿಕೆಯ ಗಂಟೆಯಾಗಿ, ಭ್ರಷ್ಟರ ಪಾಲಿಗೆ ಚಾಟಿಯಾಗಿ,
ನಮ್ಮ ಕರ್ನಾಟಕ ರಾಜ್ಯದ ಬೀದರ್ ನಿಂದ ಹಿಡಿದು ಚಾಮರಾಜನಗರದವರೆವಿಗೂ ಕಟ್ಟಕಡೆಯ ವ್ಯಕ್ತಿಗೂ ನನ್ನ ಪತ್ರಿಕೋದ್ಯಮ ನೆರವಾಗಲಿ,. ನನ್ನ ಜೀವನ ಸಾರ್ಥಕ ಮಾಡಿಕೊಳ್ಳುತ್ತೇನೆ . ಎಂಬ ಆಯ್ಕೆ ಯಾಕೆ ಮಾಡಿಕೊಳ್ಳಬಾರದು. ಶ್ರೀ ಹೆಚ್. ಆರ್. ರಂಗನಾಥರವರೇ.

ಕೈಯಲ್ಲಿ ಬ್ರಹ್ಮಾಸ್ತ್ರ ಇಟ್ಟುಕೊಂಡು ಇಂತಹದ್ದೊಂದು ಪ್ರಯತ್ನ ಮಾಡಿ.
ಕೋಟು ಸೂಟು, ಸೆಂಟೂ ಹಾಕಿಕೊಂಡು ಕಾರಿನಲ್ಲಿ ಬರುವವರಿಗಿಂತ,
ನಮಗಾಗಿ ಬೆವರು ಸುರಿಸೋ ರೈತರಿಗಾಗಿ, ಮೈ ಮೇಲೆ ಬಟ್ಟೆ ಇಲ್ಲದೇ,
ಮೂರು ಹೊತ್ತು ಹೊಟ್ಟೆಗೆ ಅನ್ನವಿಲ್ಲದ ನಮ್ಮ ನಿಮ್ಮ ಹಾಗೆ ಜೀವವನ್ನು ಹೊಂದಿರುವ ಜನಸಾಮಾನ್ಯರಿಗಾಗಿ , ಬಳಕೆಯಾಗಿ. ಮಧ್ಯಮ ವರ್ಗದವರ ಧ್ವನಿಯಾಗಿ..

ನಮಗೆ ಟಿ. ಆರ್. ಪಿ. ಇಲ್ಲದೇ ಹೋದ್ರೆ........
ನಮ್ಮ ಟಿವಿ ಚಾನೆಲ್ ಕ್ಲೋಸ್ ಆದ್ರೆ.......
ನಾವು ಸಂಬಳ ಕೊಡದೇ ಇದ್ರೆ,.....
ನಾವು ಸಂಬಳ ಕೊಡಲು ಲೇಟು ಮಾಡಿದ್ರೆ...... ಇವು ನಿಮ್ಮ ಆತಂಕಗಳೇ ಆಗಿದ್ದಲ್ಲಿ.

ನಮ್ಮ ಭಾರತ ದೇಶ ಮತ್ತು ಅದರೊಳಗಿನ ಕರ್ನಾಟಕದಲ್ಲಿ ಸತ್ಯ-ನ್ಯಾಯ-ನೀತಿ-ಧರ್ಮ-ಪ್ರಾಮಾಣಿಕತೆಯೂ ಅಲ್ಪಸ್ವಲ್ಪ ಉಳಿದಿದೆ.

ಭ್ರಷ್ಟಾಚಾರ ಮುಕ್ತ ಸಮಾಜದ ಸಂಕಲ್ಪ ಮಾಡಿ, ಪ್ರಾಮಾಣಿಕವಾಗಿ ನಿಲ್ಲುವುದಾದ್ರೆ ಬಡವರ, ರೈತರ ಪರ ನಿಲ್ಲುವುದಾದರೆ,
ಬೀದರ್ ನಿಂದ ಚಾಮರಾಜನಗರದವರೆವಿಗೂ ನಿಮ್ಮಿಂದ ಒಂದೇ ಒಂದು ಪೈಸೆ ಪಡೆಯದೇ ಸಮಾಜದಲ್ಲಿ ತುಂಬಿಕೊಂಡಿರುವ ಭ್ರಷ್ಟ ಕೊಳೆಯನ್ನು ತೊಳೆಯಲು ಸಮಾಜ ಸೇವೆಗಾಗಿ ಯುವಕರು ಕೈ ಜೋಡಿಸುತ್ತಾರೆ.

ಪ್ರಯತ್ನವೇ ಇಲ್ಲದೇ.. ಆಗೋದಿಲ್ಲ ಎಂದುಕೊಂಡರೆ ಯಾವುದಾಗುತ್ತೆ ಹೇಳಿ ?

ಮೂರು ಕೋಟಿ ಇಲ್ಲದೇ ಚುನಾವಣೆ ಸ್ಪರ್ಧಿಸಲು ಆಗುತ್ತಿಲ್ಲ ಎನ್ನುವ ರಾಜಕಾರಣಿ.
ಜನರ ತೆರಿಗೆ ಹಣದಿಂದ ಪಡೆಯುವ ಸಂಬಳ ಭತ್ಯೆ ಸಾಕಾಗದೇ ಲಂಚ-ಭಿಕ್ಷೆ ಬೇಡುವ ಸರ್ಕಾರಿ ನೌಕರ
ಹಾಗೆಯೇ
ಟಿ. ಆರ್. ಪಿ. ಎಂಬ ಆಕ್ಸಿಜನ್ ಇಲ್ಲದೇ...ಪವಿತ್ರ ಪತ್ರಿಕೋದ್ಯಮವನ್ನು ವ್ಯವಹಾರವನ್ನಾಗಿ ಬಳಸಿಕೊಳ್ಳುತ್ತೇವೆ ಎನ್ನುವ ಪತ್ರಕರ್ತರು ಈ ದೇಶಕ್ಕೆ ಬೇಡ ಅನ್ನಿಸುತ್ತದೆ

* ಪತ್ರಿಕೋದ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಅನ್ನೋದನ್ನು.
* 1200 ಜನರ ಅಭಿಪ್ರಾಯದಿಂದ ಫಿಕ್ಸ್ ಆಗುವ ಟಿ. ಆರ್. ಪಿ. ರೇಟಿಂಗಿಂತಲೂ
ಮಿಗಿಲಾದುದು ಇದೆ ಅನ್ನೋದನ್ನು ತೋರಿಸೋಣ ಬನ್ನಿ...........................

ಪ್ರಯತ್ನ ಮಾಡುವಿರಾ ?
ಅಥವಾ ಆ ಚರ್ಚೆಯಲ್ಲೂ ಒಂದಿಷ್ಟೂ ಟಿ. ಆರ್.ಪಿ. ಜಮಾ ಆಯಿತು ಅಂತ ಖುಷಿ ಪಡುತ್ತೀರಾ ?

ನಾನು ಎನ್ನುವುದಕ್ಕಿಂತ ನಾವು ಎನ್ನೋಣ.
ವ್ಯವಹಾರಕ್ಕಿಂತ ದೇಶ ಮುಖ್ಯ.
ಪವಿತ್ರ ಪತ್ರಿಕೋದ್ಯಮದ ಮೌಲ್ಯಗಳ - ಮೌಲ್ಯಗಳನ್ನು ನಾವಾಗಿಯೇ ಅಳಿಸುವುದು ಬೇಡ.

ರಾಜಕಾರಣಿಗಳನ್ನು... ಉದ್ಯಮಿಗಳನ್ನು ಓಲೈಸುವುದರಿಂದ ನಿಮ್ಮದೊಂದು ಪತ್ರಿಕ "ಉದ್ಯಮ" ಸಂತುಷ್ಟವಾಗಬಹುದು.
ಅದೇ ಪತ್ರಿಕೋದ್ಯಮವನ್ನು ಪ್ರಾಮಾಣಿಕವಾಗಿ, ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡರೆ.
ಭಾರತೀಯರಾಗಿ ಹುಟ್ಟಿ, ಭಾರತೀಯರಿಗೆ ನೆರವಾಗಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವಲ್ಲಿ ನಿಮ್ಮಪಾತ್ರ. ನಿಮ್ಮೆಲ್ಲರ ಜೀವನ ಸಾರ್ಥಕ ಗೊಳಿಸುತ್ತದೆ.

ಒಂದ್ಸಾರಿ ತಮ್ಮ ಮನಸ್ಸಾಕ್ಷಿಯ ಜೊತೆ ಮಾತಾನಾಡಿಕೊಳ್ಳಿ. ಕೆಲವೇ ಜನರ ಹೊಟ್ಟೆ ತುಂಬಿಸುವುದಕ್ಕಾಗಿ ಮನಸ್ಸಿಲ್ಲದ ಮನಸ್ಸಿನಲ್ಲಿ ಭ್ರಷ್ಟ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ಪವಿತ್ರ ಪತ್ರಿಕೋದ್ಯಮಕ್ಕೆ ಮೋಸ ಮಾಡುವುದಕ್ಕಿಂತ,
ಇದೇ ಪವಿತ್ರ ಪತ್ರಿಕೋದ್ಯಮದ ಅಸ್ತ್ರವನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ಶುದ್ಧಗೊಳಿಸಿ, ಜನಸಾಮಾನ್ಯರ ನೆರವಿಗೆ ನಿಲ್ಲಬಹುದೇ ?
ನಂತರ ನಿರ್ಧಾರ ಮಾಡಿ. ಮುನ್ನೆಡೆಯಿರಿ.

ತಮ್ಮ ಸಾಮಾಜಿಕ ಸೇವೆಗಾಗಿ, ನನ್ನಂತಹವರು ರೂಪು ರೇಷಗಳನ್ನು, ಸಲಹೆಗಳನ್ನು, ಗುರಿ ತಲುಪುವುದಕ್ಕಾಗಿ, ಸಹಕಾರ ಇದ್ದೇ ಇರುತ್ತದೆ. ಬಳಸಿಕೊಳ್ಳಬಹುದು.

ಒಳಿತು ಮಾಡೋ ಮನುಜ ಭೂಮಿಯ ಮೇಲಿರೋದು ಮೂರು ದಿವಸ.....

(ನಿನ್ನೆಯ ಚರ್ಚೆಯನ್ನು ನೋಡಿ, ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ್ದನ್ನು ನನಗೆ ತಿಳಿದಿರುವ ಕನ್ನಡದಲ್ಲಿ ಬರೆದುಕೊಂಡಿದ್ದೇನೆ.)

-ರಾಜು ಮೌರ್ಯ ದಾವಣಗೆರೆ.
rajudavanagere@gmail.com.


ಹುಚ್ಚನೆಂದು ಗೊತ್ತಿದ್ದರೂ...

ಹುಚ್ಚನೆಂದು ಗೊತ್ತಿದ್ದರೂ... ಹುಚ್ಚನನ್ನೇ ಕೂರಿಸಿಕೊಂಡು ಗಂಟೆಗಟ್ಟಲೇ ಸಮಯ ಹಾಳುಮಾಡುತ್ತಿರುವವರನ್ನು ಮಹಾನ್ ಹುಚ್ಚರೆನ್ನಬಹುದೇ ?

"ಬೆಂಗಳೂರಿನ ಡೈರಿ ಸರ್ಕಲ್ ಹತ್ತಿರ ಒಂದು ಆಸ್ಪತ್ರೆಯಿದೆ......................"


* ಕಾಡಲ್ಲಿ ಹಾರಾಡುತ್ತಿದ್ದ ರಾಜೇಶನನ್ನು ನಾಡಿಗೆ ಕರೆತಂದು, ಹುಚ್ಚನನ್ನಾಗಿಸಿ, ಕಾಡಿಸಿ ಕಾಡಿಸಿ.. ಕೊಂದೇ ಹಾಕಿದ್ದಾಯಿತು.

* ನಾಡಿನಲ್ಲಿದ್ದುಕೊಂಡೇ ಮಾನಸಿಕವಾಗಿ ಬಳಲುತ್ತಿದ್ದ ತನ್ನೆಸೆರಿನೊಂದಿಗೆ ಹುಚ್ಚನೆಂದು ಬಿಂಬಿಸಿಕೊಂಡಿದ್ದ ವೆಂಕಟರನ್ನು.. ಉಬ್ಬಿಸಿ, ರಮಿಸಿ, ಅಟ್ಟಕ್ಕೇರಿಸಿ... ಬಿಗ್ ಬಾಸ್ ನೊಳಕೆ ಸ್ವಾಗತಿಸಿ, ನಂತರ ಹೊರಗೆ ದಬ್ಬಿಸಿ...
ಮಾಧ್ಯಮಗಳ ಸ್ಟುಡಿಯೋಗಳಲ್ಲಿ ಆರಾಧ್ಯ ದೈವವನ್ನಾಗಿಸಿ....
ಆತ ಮಾನಸಿಕ ಅಸ್ವಸ್ಥನೆಂದು ಗೊತ್ತಿದ್ದರೂ ಸಹ ಉದ್ರೇಕಿಸಿ,....
ವಿವಾದಾತ್ಮಕ ಹೇಳಿಕೆಗಳನ್ನು ವೆಂಕಟನ ಬಾಯಿಂದ ಬರುವಂತೆ ಮಾಡಿ .....
ಜೈಲಿಗಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾದ ಮಾಧ್ಯಮಗಳು.


ಸಾಮಾಜಿಕ ಕಳಕಳಿಯುಳ್ಳ ಮಾಧ್ಯಮಗಳಿಗೆ ತೃಪ್ತಿ ಇಲ್ಲಾ..........

ಜೈಲಿಗೋದ್ರೂ ಬಿಡದ ಬೇತಾಳಗಳಂತೆ ಚರ್ಚೆ ಸಂವಾದಗಳು.......
ಮುಂದಿನ ಗುರಿ ???????????

- ರಾಜು ಮೌರ್ಯ ದಾವಣಗೆರೆ.

Thursday, 19 November 2015


ಮುಂಚೆ ಹೀಗಿರಲಿಲ್ಲ ಪತ್ರಿಕೆಗಳೆಂದರೆ
ಗೌರವ ಇತ್ತು..
ನಂಬಿಕೆ ಇತ್ತು,
ಭರವಸೆ ಇತ್ತು.
ಜೊತೆಗೆ
ಹೆದರಿಕೆನೂ ಇತ್ತು.
ಇವತ್ತು ಏನಾಗಿದೆ ? ಈ ಪತ್ರಿಕೋ "ಉದ್ಯಮ"ಕ್ಕೆ ?

ಮೌಲ್ಯಗಳು ಹರಾಜ್....
ನೈತಿಕತೆ ಹರಾಜ್.............
ಬೋಳಿ......!!!! ಲೇ... ಏನೂ.... ಹುಷಾರ್....
ಈ ಮಾತುಗಳು ಚರ್ಚೆಗಳಲ್ಲಿ ಭಾಗವಹಿಸುವ ಅತಿಥಿಗಳಾದ್ರೆ...
ನಿರೂಪಕರೂ ಸಹ ಇದೇ ಭಾಷೆಯನ್ನೇ ಕಲಿತಿದ್ದಾರೆ.
ಊರ ಕಾಯೋ ದೊರೆಯೇ ಕಳ್ಳನಾದ್ರೆ... ಊರಿನ ಗತಿ....ದೇವರೇ ಗತಿ.....
* ಹುಚ್ಚ ವೆಂಕಟ್ ಮಾನಸಿಕವಾಗಿ ನೊಂದಿದ್ದಾರೆ. ಅವರನ್ನು ಬಳಸಿಕೊಳ್ಳಲಾಗುತ್ತಿದೆ.
ಆತನಿಗೆ ಕೌನ್ಸಿಲಿಂಗ್ ಕೊಡಿಸುವ ಕೆಲಸ ಮಾಢುತ್ತಿಲ್ಲ.
ಪೈಪೋಟಿಗೆ ಬಿದ್ದ ಹಾಗೆ, ಬಿಸಿ ಬಿಸಿ ಸುದ್ದಿ... ಹುಚ್ಚ ವೆಂಕಟ್ ಫೇವರೇಟ್.....
* TRP ಗಾಗಿ ಒಬ್ಬ ಹುಚ್ಚ ವೆಂಕಟನ ಹುಚ್ಚು ಜಾಸ್ತಿ ಮಾಡಿ, ಮಾತಿನೊಳಗೆ ವಿವಾದಗಳನ್ನು ಸೃಷ್ಟಿ ಮಾಢಿಸಿ, ಟಿವಿ ನೋಡುವವರನ್ನೂ "ಹುಚ್ಚ"ರನ್ನಾಗಿಸಿ ಪತ್ರಿಕೋದ್ಯಮದ ಮೌಲ್ಯಗಳನ್ನೇ ಹರಾಜಿಗಿಟ್ಟಿದ್ದಾರೆ.
ಈ ಹಂತಕ್ಕೆ ತಲುಪಿದೆ ಪತ್ರಿಕೋದ್ಯಮ...
ಭಾರತವನ್ನು ದೇವರೇ ಕಾಪಾಡಬೇಕು. ಇವರಿಗೆ ಹೆದರಿಕೊಂಡೇ ದೇವರು ಭೂ ಲೋಕದತ್ತ ಸುಳಿಯುತ್ತಿಲ್ಲವೇನೋ !!!!!
ಹಿರಿಯ ಪತ್ರಕರ್ತರೆನ್ನಿಸಿಕೊಂಡಿರುವ ಹೆಚ್. ಆರ್. ರಂಗನಾಥರೂ ಈ ಹಂತಕ್ಕೆ ಇಳಿದುಬಿಟ್ರಾ ?
- ರಾಜು ಮೌರ್ಯ ದಾವಣಗೆರೆ

ವಿಶ್ವಗುರು - ಸ್ವಾಮಿ ವಿವೇಕಾನಂದರು





ಜನರು ಜೀವಿಸಲಿಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ತಿರುಚಬಲ್ಲರು. ಹೊಸತನ್ನು ಸೃಷ್ಟಿಸಬಲ್ಲರು. ಕಾಲಕ್ಕೆ ತಕ್ಕಂತೆ ಮಾತುಗಳನ್ನೂ ಹೊರಳಿಸಬಲ್ಲರು. ಅಮಾಯಕ ಜನರಿಗೆ ಮಂಕುಬೂದಿ ಎರಚಬಲ್ಲರು. 

ಭೂತಕಾಲಕ್ಕಿಂತಲೂ ವರ್ತಮಾನದಲ್ಲೂ ಎಲ್ಲದ್ದಕ್ಕೂ ಮೀರಿಸುವ ಜನರು ಜೀವಿಸುತ್ತಿದ್ದಾರೆ. 
ಇನ್ನು ಸ್ವಾಮಿ ವಿವೇಕಾನಂದರನ್ನು ಬಿಟ್ಟಾರೆಯೇ ? 

 ಆ ಮಹಾನ್ ವ್ಯಕ್ತಿ ಸ್ವಾಮೀಜೀಯವರ ತತ್ವಗಳನ್ನು ಭಾರತೀಯರೆಲ್ಲರಿಗೂ ತಲುಪಿಸಿಬಿಟ್ಟಿದ್ದಿದ್ದರೆ, ಮನುಷ್ಯನಲ್ಲಿಡಗಿರುವ ಸ್ವಾರ್ಥ, ದ್ವೇಷ, ಅಸೂಯೆ ಇವುಗಳಿಲ್ಲದೇ ಭಾರತ ಪ್ರಶಾಂತವಾಗಿರುತ್ತಿತ್ತು. 

ಇವತ್ತಿಗೂ ಸ್ವಾಮಿ ವಿವೇಕಾನಂದರುನ್ನು ಕೆಲವೇ ವರ್ಗಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಅದ್ಯಾಕೋ ಗೊತ್ತೇ ಆಗುತ್ತಿಲ್ಲ. ಸ್ವಾಮಿಜೀಯವರ ಪರಿಚಯ, ತತ್ವಗಳನ್ನು ಶೋಷಿತರಿಗೆ ತಿಳಿಸುವ ಪ್ರಯತ್ನವೇ ಮಾಡುತ್ತಿಲ್ಲ. ದುರಾದೃಷ್ಟವೆಂದರೆ. ಸ್ವಾಮಿ ವಿವೇಕಾನಂದರನ್ನು ಒಂದು ರಾಜಕೀಯದ ಪರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಬೇರೆ ರಾಜಕೀಯ ಪಕ್ಷಗಳಲ್ಲಿರುವ ಹಿಂದುಗಳನ್ನು ಸ್ವಾಮೀಜಿಯವರಿಂದ ದೂರ ಇಡುವ ಪ್ರಯತ್ನಗಳು ಸಫಲವಾಗುತ್ತಿವೆ. 

ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗುತ್ತಿದೆ. ಭಾರತೀಯ ಜನತಾ ಪಕ್ಷ ಬಿಟ್ಟು, ಬೇರೆ ಪಕ್ಷಗಳು ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಳ್ಳುತ್ತಿವೆಯೇ ? ಸ್ವಾಮೀಜಿಯವರ ಜಯಂತಿಗಳನ್ನು ಆಚರಿಸುತ್ತಿವೆಯೇ ? ಮಹಾತ್ಮಾ ಗಾಂಧೀಜೀ, ನೇತಾಜೀ ಸುಭಾಷಚಂದ್ರಭೋಸ್, ಲಾಲ ಬಹದ್ದೂರ್ ಶಾಸ್ತ್ರಿ, ಸೇರಿದಂತೆ ಎಲ್ಲಾ ಮಹಾನ್ ಪುರುಷರ ಸ್ಮರಣೆ ಮತ್ತು ಜಯಂತಿಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮಾಢುತ್ತಿವೆ ಆದರೆ ಸ್ವಾಮಿ ವಿವೇಕಾನಂದರನ್ನು ಮಾತ್ರ ಭಾರತೀಯ ಜನತಾ ಪಕ್ಷಕ್ಕೆ ಸೀಮಿತ ಗೊಳಿಸುತ್ತಿರುವುದು ದುರಾದೃಷ್ಟಕರವೇ ಸರಿ.

 * ಸ್ವಾಮಿ ವಿವಾಕಾನಂದರು ತಮ್ಮ ಜೀವಿತಾವಧಿಯಲ್ಲಿ, ಭೇದಭಾವ ಮಾಡಿಲ್ಲ. ಹಿಂದು ಧರ್ಮವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಮಹಾತ್ಮ. ಆ ಮಹಾತ್ಮ ಭಾರತೀಯರ ಆಸ್ತಿ. ಅವರ ತತ್ವಗಳು ಭಾರತೀಯರೆಲ್ಲರೂ ತಲುಪಬೇಕು. (ಸ್ವಾಮೀಜೀಯ ಅನುಯಾಯಿಗಳು ಎಂದು ಘೋಷಷಿಕೊಂಡಿರುವ ಕೆಲವರು ಸ್ವಾಮೀಜೀ ತತ್ವಗಳನ್ನು ತಲುಪಿಸುವ ಪರಿ ಹೇಗಿದೆ ಎಂದರೆ, ಸ್ವಾಮೀಜೀಯವರ ಜಯಂತಿಯಂದು, ಸ್ವಾಮೀ ವಿವೇಕಾನಂದರ ಬಗ್ಗೆ ತಿಳಿದಿರುವವರ ಮುಂದೆಯೇ ತತ್ವಗಳ ಬಗ್ಗೆ ಭಾಷಣಗಳ ರೂಪದಲ್ಲಿ ಹೆಳಲಾಗುತ್ತಿದೆ.) 

ಸ್ವಾಮೀಜೀಯವರ ಬಗ್ಗೆ ತಿಳಿಯದವರ ಬಳಿ ಹೋಗಿ ಅಂತಹವರಿಗೆ ತಿಳಿಸಿದರೆ, ತತ್ವಗಳನ್ನು ಕೆಲವರಾದ್ರೂ ಅಳವಡಿಸಿಕೊಂಡರೂ ಸ್ವಾಮೀಜೀಗೆ ಗೌರವ ನೀಡಿದಂತಾಗುತ್ತದೆ. ಈ ಕಾರ್ಯ ಆಗಬಹುದೇ... .... 

ಯಾರೋ ಕೆಲವರು ಸ್ವಾಮೀಜೀಯವರ ಬಗ್ಗೆ ಅವರ ಆಹಾರ ಪದ್ಧತಿಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಹೌದು. ಯಾಕೆ ಹೇಳಿ ? ಸ್ವಾಮಿ ವಿವೇಕಾನಂದರನ್ನು ಹಿಂದೂಸ್ಥಾನದ ಆಸ್ತಿಯನ್ನಾಗಿ ಮಾಡಲೇ ಇಲ್ಲ . ಸ್ವಾಮೀಜೀಯವರು ಅವರ ತತ್ವಗಳು ಒಂದು ನೂರ ಇಪ್ಪತ್ತು ಕೋಟಿ ಭಾರತೀಯರಿಗೂ ತಲುಪಬೇಕು. ಆದರೆ ನಾವೇನು ಮಾಡುತ್ತಿದ್ದೇವೆ. 

ಮಹಾತ್ಮನನ್ನು ಒಂದು ರಾಜಕೀಯ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತಿದ್ದೇವೆ. ನಮಗೇ ಸೀಮಿತ ಎಂದು ಅಧಿಕಾರಯುತವಾಗಿ ಸಮರ್ಥಿಸಿಕೊಳ೵ಳುತ್ತಿದ್ದೇವೆ. 

ಸ್ವಾಮೀಜೀಯವರನ್ನು ಟೀಕಿಸುವವರಿಗೆ ನಿಜವಾಗಿಯೂ ಸ್ವಾಮೀಜೀಯವರ ಮೇಲೆ ಕೋಪವಿರುವುದಿಲ್ಲ. ಒಳ್ಳೇಯ ತತ್ವಗಳನ್ನು ಯಾರೂ ಬೇಕಾದರೂ ಸ್ವೀಕರಿಸುತ್ತಾರೆ. ಅವರ ವಿರೋಧ ೊಂದು ರಾಜಕೀಯ ಪಕ್ಷದ ವಿರುದ್ಧ ಆ ರಾಜಕೀಯ ಪಕ್ಷದ ಪರ ಪ್ರಚಾರಕಾಗಿ, ವಕ್ತಾರಾಗಿರುವವರ ವಿರುದ್ಧ ಈ ಸ್ವಾರ್ಥ ರಾಜಕೀಯದಾಟಗಳಿಗೆ ನಿಷ್ಕಲ್ಮಶ ಸ್ವಾಮಿ ವಿವೇಕಾನಂದರು ಬ:ಳಕೆಯಾಗುತ್ತಿದ್ದಾರೆ. 

--ಸ್ವಲ್ಪ ಯೋಚಿಸಿ ನೋಡಿ, ಎಲ್ಲರಿಗೂ ಸಲ್ಲಬೇಕಾದ ಮಹಾನ್ ಪುರುಷರನ್ನು ಕೆಲವೇ ವರ್ಗಗಳಿಗೆ, ಒಂದು ಪಕ್ಷಕ್ಕೆ ಸೀಮೀತ ಗೊಳಿಸುತ್ತಿಲ್ಲವೇ ? ಸ್ವಾಮೀಜೀಯವರ ಭಾಷಣಕ್ಕೆ ಅಮೇರಿಕಾದ ಜನರೇ ತಲೆಬಾಗಿರುವಾಗ, ಅವರ ತತ್ವಗಳನ್ನು ನಮ್ಮ ಭಾರತ ದೇಶದಲ್ಲಿಯೇ ನಮ್ಮೊಟ್ಟಿಗೇ ಜೀವಿಸುತ್ತಿರುವ ಇತರರಿಗೂ ತಲುಪಿಸುವುದು ಅಸಾಧ್ಯವೇ ? 

ಸ್ವಾಮೀಜೀಯವರು ಎಲ್ಲೂ ಯಾವತ್ತೂ ಹೇಳಿಲ್ಲ. ಭೇದ - ಭಾವ ಮಾಡು, ಇತರರನ್ನು ದ್ವೇಷಿಸು, ಮುಂದಿನ ದಿನಗಳಲ್ಲಿ ನನ್ನ ಹೆಸರನ್ನು, ಸ್ವಹಿತಕ್ಕೆ ಬಳಸಿಕೊಳ್ಳಿ ಎಂಬ ಮಾತನ್ನು. ಆದರೂ ನಮಗೆ ಅದರ ಬಗ್ಗೆ ಚಿಂತೆ ಇಲ್ಲ. "ನಾನು" ಅಷ್ಟೆ. 

ಸ್ವಾಮೀಜೀಯವರ ಮಾತುಗಳು ಸೋತವನಿಗೆ ಆತ್ಮಸ್ಥೈರ್ಯ ತುಂಬುತ್ತೆ. ಬಿದ್ದವನಿಗೆ ಎದ್ದು ಓಡುವ ಚೈತನ್ಯ ನೀಡುತ್ತೆ. ಬರಡಾದ ಬಾಳಿಗೆ ಬೆಳಕು ತುಂಬುತ್ತೆ. ಇಂತಹ ವ್ಯಕ್ತಿಯನ್ನು ನಾವು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದೇವೆ ಅನ್ನಿಸುತ್ತಿಲ್ಲವೇ ?

 ಮನುಷ್ಯನಲ್ಲಿರ ಬೇಕಾದ ದಯೆ, ವಿಶ್ವಾಸ, ನಂಬಿಕೆ, ನ್ಯಾಯ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ, ವಿಶ್ವಕ್ಕೆ ಶಾಂತಿಧೂತರಾದ ಸ್ವಾಮೀಜೀಯವರ ಅನುಯಾಯಿಗಳೆನ್ನಿಸಿಕೊಂಡವರು, ಜೀವನವನ್ನು ಅರ್ಪಣೆ ಮಾಡಿಕೊಂಡವರು, ಅವರನ್ನು ಒಂದೇ ಕಡೆ, ಕೆಲವೇ ವರ್ಗಗಳಿಗೆ ಸೀಮಿತಗೊಳಿಸದೇ, ಸ್ವಾರ್ಥ ರಾಜಕಾರಣದ ಕೆಸರಿನಲ್ಲಿರುವ ಸ್ವಾಮೀಜೀಯವರ ಹೆಸರನ್ನು ಹೊರ ತಂದು ಭಾರತೀಯರೆಲ್ಲರ ಮನಸ್ಸಿನಲ್ಲಿ ಅವರೂ ಹಾಗೂ ಅವರ ತತ್ವಗಳು ನೆಲೆಸುವಂತೆ ಮಾಡುವ ಕಡೆ ಹೆಚ್ಚು ಗಮನ ಹರಿಸಲಿ. ಎಂದು ವಿಶ್ವಾಸಪೂರ್ವಕವಾಗಿ ಕೈ ಮುಗಿದು ವಿನಂತಿಸಿಕೊಳ್ಳೋಣ. 

- ರಾಜು ಮೌರ್ಯ ದಾವಣಗೆರೆ.

Monday, 31 August 2015

ಪ್ರಾಮಾಣಿಕರಾ ? ????

ಪ್ರಾಮಾಣಿಕರಾ ? ????
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲಿ ಕೋಟಿ ಕೋಟಿ ಆಸ್ತಿ ಹೇಗೆ ಬರುತ್ತೆ.
ಭಾರತ ದೇಶದ ಬಗ್ಗೆ, ಕರ್ನಾಟಕ ರಾಜ್ಯದ ಬಗ್ಗೆ, ಬೆಂಗಳೂರಿನ ಬಗ್ಗೆ
ನಿಜವಾಗಿಯೂ ಕಾಳಜಿ ಇದ್ದಿದ್ದೇ ಆದ್ರೆ
------------------------------------------------------------------------------------
ಎಲ್ಲಾ ರಾಜಕಾರಣಿಗಳು ಸ್ವಯಂ ನಿವೃತ್ತಿ ಘೋಷಿಸಿಕೊಂಡು ಸುಮ್ಮನಿದ್ದುಬಿಟ್ರೆ ಸಾಕು.
-----------------------------------------------------------------------------------
ಭಾರತ, ಕರ್ನಾಟಕ, ಬೆಂಗಳೂರು ಮುಖ್ಯವಾಗಿ ಅಮಾಯಕ ಭಾರತೀಯರು ಉಳಿಯುತ್ತಾರೆ.

ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಪೈಸೆ ""ಭ್ರಷ್ಟಾಚಾರದ ಹಣ ಮುಟ್ಟಿಲ್ಲ'' ಎಂದು
ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಿರುವ ರಾಜಕೀಯ ನಾಯಕರು ಆತ್ಮಸಾಕ್ಷಿಯಾಗಿ ಹೇಳುತ್ತಾರೆಯೇ ?
------------------------------------------------------------------------------------------
ಖಂಡಿತಾ ಹೇಳಲು ಸಾಧ್ಯವೇ ಇಲ್ಲ.
--------------------------------------------------------------------------------------------
ಯಾಕೆಂದರೆ ಭ್ರಷ್ಟಾಚಾರದ ಹೊಲಸಿನ-ವಾಸನೆ ಅವರನ್ನಂಟಿಕೊಂಡಿರುತ್ತೆ
ರಾಜು ಮೌರ್ಯ ದಾವಣಗೆರೆ

ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ಇರುವ ವ್ಯತ್ಯಾಸಗಳು

ಇತ್ತೀಚಿಗೆ ನಾವು ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ.ಇಂದಿನ ರಾಜಕೀಯ ವ್ಯವಸ್ಥೆಗೂ,  ಇಂದಿನ           ಮಾಧ್ಯಮ (ದೃಶ್ಯ) ಗಳಿಗೂ ವ್ಯತ್ಯಾಸಗಳೇ ಕಾಣುತ್ತಿಲ್ಲ. 
ರಾಜಕೀಯದಲ್ಲಿ  ರಾಜಕಾರಣಿಗಳು ಪಕ್ಷದಿಂದ ಪಕ್ಷಗಳಿಗೆ ಹಾರುತ್ತಾ, ವಲಸೆ ಹೋಗುವುದು ಸಾಮಾನ್ಯವಾಗಿದೆ.
ದೃಶ್ಯ ಮಾಧ್ಯಮಗಳಲ್ಲೂ ಇದನ್ನು ಕಾಣುತ್ತಿದ್ದೇವೆ. 

---------------------------------*ಪಕ್ಷಾಂತರ*---------------------------------------
ಇಂದು   ಒಂದು  ಟಿವಿಯಲ್ಲಿ ಇದ್ದವರು ನಾಳೆ ಬೇರೆ ವಾಹಿನಿಯಲ್ಲಿರುತ್ತಾರೆ. ಸುವರ್ಣದಲ್ಲಿದ್ದವರು ಇನ್ಯಾವುದೋ ವಾಹಿನಿಗೆ ಜಿಗಿದಿರುತ್ತಾರೆ. ಇದು ನಿರಂತರವಾಗಿ ಆಗುತ್ತಿದೆ. 

ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ತಮ್ಮ ರಾಜಕೀಯ ಭವಿಷ್ಯಕ್ಕೆ ಜಿಗಿದಾಟಗಳು ಪರದಾಟಗಳು ಮಾಡುತ್ತಿದ್ದರೆ, ಅವರುಗಳ ತಪ್ಪುಗಳನ್ನು ಜನರಿಗೆ ತೋರಿಸುತ್ತಿದ್ದೇವೆ ಎಂಬ ಭ್ರಾಂತಿಯಲ್ಲಿರುವ ನಮ್ಮ ಮಾಧ್ಯಮಗಳು ತಮ್ಮ ನೆಲೆಗಳಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ.  ರಾಜಕಾರಣಿಗಳ ಪಕ್ಷಾಂತರಗಳ ಬಗ್ಗೆ ಗಂಟೆಗಟ್ಟಲೇ ಟಿ.ವಿ ಸ್ಟುಡಿಯೋದಲ್ಲಿ ಮಾತಾನಾಡುವ ಬಹುತೇಕ ಪತ್ರಕರ್ತ ಮಿತ್ರರು ಅವರುಗಳು ತಮ್ಮ ಮೂಲ ವಾಹಿನಿಗಳಿಂದ ಜಿಗಿದು ಮತ್ತೊಂದು ವಾಹಿನಿಯಲ್ಲಿ ಕುಳಿತಿರುತ್ತಾರೆ.
---------------------*ಮೂಲ ವಲಸಿಗರ ತಾರತಮ್ಯ*---------------------------
ರಾಜಕಾರಣದಲ್ಲಿ ಮೂಲ - ವಲಸಿಗರು ಎಂಬ ಕಾರ್ಯಕರ್ತರುಗಳು ಎನ್ನುವ ರಾಜಕಾರಣಿಗಳ ಜಗಳಗಳನ್ನು ನಾವು ನೋಡುತ್ತಿರುತ್ತೇವೆ.
ಹಾಗೆಯೇ, ನಮ್ಮ ಮಾಧ್ಯಮಗಳಲ್ಲಿ ಯಾವುದೋ ವಾಹಿನಿಯಲ್ಲಿದ್ದವರು ಏಕಾಏಕಿ ಮತ್ತೊಂದು ಮಾಧ್ಯಮಕ್ಕೆ ಬಂದು  ವಾಹಿನಿ  ಆರಂಭದಿಂದಲೂ  ಕಾರ್ಯ ನಿರ್ವಹಿಸುತ್ತಿರುವ  ಪತ್ರಕರ್ತರನ್ನು ಮೂಲೆ ಗುಂಪು ಮಾಡಿ, ಅವರ ಮೇಲೆ ಸವಾರಿ ಮಾಡುತ್ತಾ, ಅವರಿಗೆ ಉಸಿರು ಗಟ್ಟಿಸುವ ವಾತಾವರಣ ಸೃಷ್ಠಿ ಮಾಡಿ, ಮೂಲ ಪತ್ರಕರ್ತರು ವಾಹಿನಿಯಿಂದಲೇ ನಿರ್ಗಮಿಸುತ್ತಿರುವ ಘಟನೆಗಳು ಬಹಳಷ್ಟು ಇವೆ.
ಬೇರೆಯವರ, ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸಲು ಹೊರಟಿರುವ ನಮ್ಮ ಮಾಧ್ಯಮ ಮಿತ್ರರಿಗೆ 
ನೈತಿಕ ಶಕ್ತಿ , ಮೌಲ್ಯಗಳ ಬಗ್ಗೆ ಮನವರಿಕೆ ಯಾಗಿದೆಯೇ?

ಕೆಲವು ವಲಸಿಗ ರಾಜಕಾರಣಿಗಳಿಂದ ಅವರು ಗುಂಪುಗಳನ್ನು ಕರೆತಂದು ಹೇಗೆ  ಮೂಲ ಪಕ್ಷದ ಕಾರ್ಯಕರ್ತರು ಮಾನಸಿಕ ವಾಗಿ ಹಿಂಸೆ ಅನುಭವಿಸಿ, ಇಕ್ಕಟ್ಟಿನ ಸ್ಥಿತಿಯಲ್ಲಿ ನಿರ್ಮಾಣ ಮಾಡಿರುತ್ತಾರೋ
ಹಾಗೆಯೇ ಇಂದು ಮಾಧ್ಯಮ ಕ್ಷೇತ್ರದಲ್ಲೂ ಆಗುತ್ತಿದೆ.
ಎಲ್ಲೋ ಇದ್ದವರು ಒಂದು ಮಾಧ್ಯಮಕ್ಕೆ ಬಂದು ತಮ್ಮದೇ ಆದ ಗುಂಪನ್ನು ಕರೆತಂದು ಅವರನ್ನು ಪ್ರತಿಷ್ಟಾಪಿಸುವ  ಉದ್ದೇಶದಿಂದ ಮೂಲ ಪತ್ರಕರ್ತರಿಗೆ ಮಾನಸಿಕ ಕಿರಿಕಿರಿಯನ್ನುಂಟು ಮಾಡುತ್ತಾ, ಅವರುಗಳನ್ನು ಶಾಶ್ವತವಾಗಿ ಮೂಲೆ ಗುಂಪು ಮಾಡುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. 
----------*ಪ್ರಚಾರ ಕಾರ್ಯ ವೈಖರಿ ಮತ್ತು ಅಧಿಕಾರ ದಾಹ*-----------------------
ರಾಜಕಾರಣಿಗಳ ಹಾಗೂ ಮಾಧ್ಯಮಗಳ ನಡುವೆ ಕಂಡು ಬರುವಂತಹ  ವ್ಯತ್ಯಾಸಗಳೆಂದರೆ :
ಸ್ವಾರ್ಥ, ಅಧಿಕಾರ ದಾಹ, ಸಂಪತ್ತು ಗಳಿಕೆ ಇವು ಇಷ್ಟೇ ಆಗಿ ಹೋಗಿವೆ. 
ದೇಶದ ಬಗ್ಗೆ, ರಾಜ್ಯದ ಬಗ್ಗೆ ಕಾಳಜಿಯಂತೂ ಕಾಣುತ್ತಿಲ್ಲ.
ಚುನಾವಣೆ ಸಮಯದಲ್ಲಿ ನಮ್ಮ ರಾಜಕಾರಣಿಗಳು ಭರವಸೆಗಳ ಸುರಿಮಳೆಗಳನ್ನು ಸುರಿಸುತ್ತಾರೆ. ಆಶ್ವಾಸನೆಗಳನ್ನು ಕೊಡುತ್ತಾರೆ. ಜನರನ್ನು ತಮ್ಮತ್ತ ಸೆಳೆಯಲು ಏನೆಲ್ಲಾ ಸರ್ಕಸ್ಸುಗಳನ್ನು ಮಾಡಬೇಕೋ ಅವನ್ನೆಲ್ಲಾ ಮಾಡುತ್ತಾರೆ.

ಹಾಗೆಯೇ ನಮ್ಮ ಮಾಧ್ಯಮಗಳು ಸಹ, ತಮ್ಮ ವಾಹಿನಿಗೆ ಹೆಸರು ಬರಬೇಕು ಅನ್ನೋ ಉದ್ದೇಶದಿಂದ, ಪ್ರಚಾರಕ್ಕೆ ಏನೆಲ್ಲಾ ಬೇಕೋ ಅವನ್ನೆಲ್ಲಾ ಮಾಡುತ್ತಾರೆ. "ಭ್ರಷ್ಟಾಚಾರದ ವಿರುದ್ದ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಕರೆನೀಡಿದಾಗ  ನಮ್ಮ ಕನ್ನಡ ಮಾಧ್ಯಮಗಳು ಪೈಪೋಟಿಗೆ ಬಿದ್ದಂತೆ "ಭ್ರಷ್ಟಾಚಾರ ಅಭಿಯಾನಗಳು" ಮಾಡಿದವು. ಬೀದಿ ಬೀದಿಗಳಲ್ಲಿ ತಮ್ಮ ವಾಹನಗಳನ್ನು ಸಿಂಗರಿಸಿಕೊಂಡು ಸುತ್ತಿದ್ದೇ ಸುತ್ತಿದ್ದೆ. " ದಿನ ಕಳೆದಂತೆ ಎಲ್ಲವೂ ಮಾಯ!!
---------------------------------*ಜ್ಯೋತಿಷ್ಯ *-----------------------------

ರಾಜಕಾರಣಿಗಳು ಪ್ರತಿಯೊಂದಕ್ಕೂ ಜ್ಯೋತಿಷಿಗಳ ಮೊರೆ ಹೋಗುವುದು ಫ್ಯಾಷನ್ ಆಗಿಬಿಟ್ಟಿದೆ. ಅಧಿಕಾರ ಪಡೆಯಲು, ಕುರ್ಚಿಯಲ್ಲಿ ಕೂರಲೂ, ರಾಜೀನಾಮೆ ಕೊಡಲು, ಯಾಗಗಳನ್ನು ಮಾಡಲು ಸಹ, ಜೊತೆ ವಾಸ್ತುವಿನ ಮೊರೆ ಹೋಗಲು  ತರತರನಾದ ಜ್ಯೋತಿಷ್ಯಗಳನ್ನು  ಹುಡುಕಿಕೊಂಡು ಅಡ್ಡಾಡುತ್ತಿದ್ದಾರೆ.
ನಮ್ಮ ಮಾಧ್ಯಮಗಳು ಪ್ರತಿನಿತ್ಯ ಎಲ್ಲೆಲ್ಲೋ ಇದ್ದ ಜ್ಯೋತಿಷಿಗಳನ್ನು ಹುಡುಕಿ ಕರೆತಂದು ಒಂದೊಂದು ವಾಹಿನಿಗಳು ಒಬ್ಬೊಬ್ಬರಿಂದ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಿವೆ. (ಸಂಖ್ಯಾಶಾಸ್ಟ್ರ, ವಾಸ್ತು ಶಾಸ್ತ್ರ, ವಿವಿಧ ಶಾಸ್ತ್ರಗಳ ಪರಿಚಯದೊಂದಿಗೆ, ಅವರುಗಳ ಫೋನ್ ನಂಬರುಗಳ ಜೊತೆಗೆ ಅವರುಗಳ ವಿಳಾಸಗಳನ್ನು ಸಹ ಜನರಿಗೆ ಕೊಡುತ್ತಾ ಮೌಢ್ಯತೆಯನ್ನು ತೊಲಗಿಸಲು ಪ್ರಮುಖ ಪಾತ್ರ ವಹಿಸಿಬೇಕಾದವರೇ,  ಜ್ಯೋತಿಷ್ಯದ ಮೇಲೆ ನಂಬಿಕೆ ಹುಟ್ಟಿಸಿ, ಭೀತಿ ತರುವ ಪ್ರಯತ್ನ ಮಾಡುತ್ತಿದ್ದಾರೆ. 

-------------------------------*ಪಕ್ಷ ನಿಷ್ಠೆ, ಮಾಧ್ಯಮ ನಿಷ್ಠೆ*------------------------------------------- 
ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ತಮ್ಮ ಪಕ್ಷದವರು ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಿಕೊಳ್ಳುವ ಕೆಲಸಗಳನ್ನು  ರಾಜಕಾರಣಿಗಳು ಮಾಡುತ್ತಿರುತ್ತಾರೆ.
ಅದರಂತೆ ನಮ್ಮ ಮಾಧ್ಯಮಗಳು ಒಂದೊಂದು ಮಾಧ್ಯಮವು ಒಂದೊಂದು ರಾಜಕೀಯ ಪಕ್ಷಗಳ ಪರವಾಗಿ ಅವುಗಳ ಮುಖವಾಣಿಗಳಂತೆ ಕೆಲಸ ಮಾಡುತ್ತಿರುವುದು, ನಂಬಿಕೆ, ಮೌಲ್ಯಾಧಾರಿತ ವಿಷಯಗಳನ್ನು ವಿಶ್ವಾಸಕ್ಕೆ ಅರ್ಹವಲ್ಲದ ಸುದ್ಧಿಗಳನ್ನು ನೀಡಲು ವಿಫಲವಾಗಿ ತಮ್ಮ ಕರ್ತವ್ಯವನ್ನು ಮರೆಯುತ್ತಿದ್ದಾರೆ.
--------------------------------------------------------------------------------------------------------------------------------------ತಾವು ಏನು ಮಾಡುತ್ತಿದ್ದೇವೆ ಅನ್ನೋದರ ಬಗ್ಗೆ ಮರೆತೆ ಹೋಗಿರುತ್ತವೆ. ಅಚ್ಚಕನ್ನಡಿಗರೇ ತುಂಬಿಕೊಂಡಿರುವ (ಮಾಲೀಕ ಪರಭಾಷಿಕರೇ) ವಾಹಿನಿಯಲ್ಲಿ  ಕನ್ನಡ ಅಕ್ಷರಗಳ ಕಗ್ಗೊಲೆಯಾಗುತ್ತಿದ್ದರು. ಅದರ ಬಗ್ಗೆ ಹೇಳಿದರೂ ತಲೆ ಕೆಡಿಸಿಕೊಳ್ಳದ ವಾಹಿನಿಗಳು ಏನೇನೋ ಮಾಡಲು ಹೊರಟಿವೆ. ಬೆಳಗಿನ ಸಮಯದಲ್ಲಿ ಜ್ಞಾನಾರ್ಜನೆಗೆ ಕೇಳುವ 5 ಪ್ರಶ್ನೆಗಳನ್ನು ಕೇಳಿದ್ದೇ ಕೇಳಿ ಕೊಂಡು ಬೇರೆ ಪ್ರಶ್ನೆಗಳಿಗೆ ಬರ ಬಂದಿದೆ ಎಂಬಂತೆ ಮಾಡುತ್ತಿದ್ದಾರೆ. 
ಜನಸಾಮಾನ್ಯರು ಒಮದು ತಪ್ಪು ಮಾಡಿದರೆ. ಬೆಳಗಿನಿಂದ ಸಂಜೆ ವರೆವಿಗೂ ಆ ವಿಚಾರಗಳನ್ನು ತೋರಿಸಿ, ನೇರ ಪ್ರಸಾರದಲ್ಲಿ ಅದಕ್ಕೆ ಸಂಬಂಧಪಟ್ಟವರನ್ನು ಹಿಡಿದುತಂದು ಅವರನ್ನು ಹಣ್ಣುಗಾಯಿ ನೀರು ಗಾಯಿ ಮಾಡುವ ನಮ್ಮ ಮಾಧ್ಯಮಗಳು ಮಾಜಿ ಮುಖ್ಯಮಂತ್ರಿಯವರ ಮದುವೆಯ ವಿಚಾರ ಕೋರ್ಟ್ನ ತನಕ ಬಂದಿದ್ದರೂ ಸಹ  ಇದುವರೆವಿಗೂ ಸಂಬಂಧಪಟ್ಟವರನ್ನು ಕರೆತಂದು ಅದರ ಬಗ್ಗೆ ಜನರಿಗೆ ತೋರಿಸುವ ಕೆಲಸ ಮಾಡಿದ್ದಾರಾ? 
ಇಲ್ಲ ಯಾಕೆ ಹೀಗೆ ? ಜನಸಾಮಾನ್ಯರಿಗೊಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯವಾ?  

ಮತ್ತೊಂದು ವಾಹಿನಿ ಯಂತೂ ಬೆಳಗಿನ ಸಮಯದಲ್ಲಿ "ಬಿಡದಿಯ ನಿತ್ಯಾನಂದಸ್ವಾಮಿಯ ಪ್ರವಚನಗಳನ್ನು" ಪ್ರದರ್ಶಿಸುತ್ತಿದ್ದಾರೆ. ಎಲ್ಲಿಗೆ ಬಂದು ನಿಂತಿದೆ. ನಮ್ಮ ಮಾಧ್ಯಮಗಳು. 
ರಾಜಕಾರಣಿಗಳಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡಿಗರಿಗೆ ಇರಲು ನೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ  ಉಂಟಾಗುತ್ತಿದ್ದರೂ ಸಹ ಪರಭಾಷಿಕರ ವಲಸೆಯನ್ನು ತಪ್ಪಿಸುತ್ತಿಲ್ಲ. ಕಾರಣ  "ಓಟ್ ಬ್ಯಾಂಕ್ " ಯಾವನೇ ಭಾಷೆಯವನಾದರೂ ತನ್ನ ಮನೆ ಮುರುಕಲು ಮನೆಯಾಗಿದ್ದರೂ ಪರಭಾಷಿಕರಿಗೆ ಐಶಾರಾಮಿ ಜೀವನ ನಡೆಸಲು ಅವಕಾಶಗಳು ಮಾಡಿಕೊಡುತ್ತಿವೆ. 
ಹಾಗೆಯೇ ನಮ್ಮ ವಾಹಿನಿಗಳು ಅಷ್ಟೇ. ಬೇರೆ ಭಾಷೆಯ ಚಲನ ಚಿತ್ರಗಳನ್ನು ನೇರವಾಗಿ ಗಂಟೆಗಟ್ಟಲೇ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತವೆ. (ನಮ್ಮ ಪುಣ್ಯಕ್ಕೆ ಅವರವರ ಭಾಷೆಗಳಲ್ಲೇ ವಿವರಣೆ ನೀಡುತ್ತಿಲ್ಲ) ಬೇರೆ ಯಾವುದೇ ರಾಜ್ಯಗಳಲ್ಲಿ ಒಂದೇ ಒಂದು ಕನ್ನಡದ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆಯಾ ? ಉದಾಹರಣೆಗಳಿಲ್ಲದಿರುವಾಗ ನಮ್ಮವರಿಗ್ಯಾಕೆ ಪರಭಾಷಿಕರ ಬಗ್ಗೆ ವ್ಯಾಮೋಹ?

ಇಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ.. ನಮ್ಮ ಈ ವ್ಯವಸ್ಥೆಯನ್ನು  ಬದಲಿಸಲು ಸಾಧ್ಯವೇ?
ಖಂಡಿತಾ ಸಾಧ್ಯವಿಲ್ಲ. ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರೆ???????????