Monday, 31 August 2015

ಇದೇ ನಾ ಪ್ರಜಾಪ್ರಭುತ್ವ ??
ಬೆರಳಿಗೆ ಹಾಕಿದ ಶಾಹಿ ಮಾಸಿಲ್ಲ.
ಅಪ್ಪ, ಅಮ್ಮ, ಅಣ್ಣ ಮತ ನೀಡಿ ಅಂತ ಬೀದಿ ಬೀದಿ ಸುತ್ತಿ ದಿನಗಳು ಕಳೆದಿಲ್ಲ.
ಈ ಬಾರಿಯ ವಿಶೇಷ ಪ್ರಮುಖ ಪಕ್ಷಗಳು
ಭಾರೀ ಪ್ರಮಾಣದಲ್ಲಿ ಚುನಾವಣಾ ಪೂರ್ವದಲ್ಲಿ
"ಸಾಮೂಹಿಕ ಪ್ರಮಾಣ ಸ್ವೀಕಾರ ಮಾಡಿದ್ದು"
100 - 76 - 14 - 8 ಅಂಕಿಯಾಟ ಶುರುವಾಗಿದೆ.
ಲಕ್ಷುರಿ ಬಸ್ ಗಳನ್ನೇರಿ ರೆಸಾರ್ಟ್ ಪ್ರವಾಸಕ್ಕೆ ಓಡುತ್ತಿದ್ದಾರೆ.
ಇವರ ಮನಸ್ಥಿತಿ
ಅವರ ಮೇಲೆ ಅವರಿಗೇ ನಂಬಿಕೆ ಇಲ್ಲ.
ಯಾಕೆಂದ್ರೆ
ಮತದಾರರು ಮತಗಳನ್ನು ಮಾರಿಕೊಂಡಿದ್ದಾರೆ
ಮತಗಳನ್ನು ಗಳಿಸಿದವರು
ಇನ್ನಾರಿಗೋ ಮಾರಿಕೊಂಡಿದ್ದಾರೆ.
ಇಲ್ಲೆ ಇದ್ರೆ ಮತ್ಯಾರ್ಯದ್ರೂ ಖರೀದಿಸಿಬಿಡ್ತಾರೆನೋ ಎಂಬ ಅಂಜಿಕೆ.
ಇದೇ ನಾ ಪ್ರಜಾಪ್ರಭುತ್ವ ??
ತಲೆ ತಗ್ಗಿಸುವಂತಿದೆ.
ತನ್ನ ಮೇಲೆ ತನಗೇ ನಂಬಿಕೆ ಇಲ್ಲದವರು ಆಡಳಿತ ನಡೆಸುವರೇ ?
ಶೇಕಡಾ 45% ಮತದಾನ ಮಾಡಿ ಧಿಕ್ಕರಿಸಿದ್ದಾನೆ ಮತದಾರ ಇನ್ನು ಬುದ್ದೀ ಬಂದಿಲ್ಲವಲ್ಲ.
"ರಾಜಕೀಯದಲ್ಲಿ ಯಾರೂ ಮಿತ್ರರಲ್ಲ ಯಾರೂ ಶತ್ರುಗಳಲ್ಲ " ಈ ನಾಣ್ಣುಡಿಯನ್ನು ಅದ್ಯಾರು ಸೃಷ್ಟಿ ಮಾಡಿದರೋ ಅದೇ ನಾಣ್ಣುಡಿಯನ್ನೇ ಭಜಿಸುತ್ತಾ,
ಅನುಕೂಲಕ್ಕೆ ತಕ್ಕಂತೆ
"ಒಮ್ಮೆ ಇವರು ಡಾರ್ಲಿಂಗ್ ಆದ್ರೆ ಮತ್ತೆ ಅದೇ ಡಾರ್ಲಿಂಗ್ ವಿಲನ್
ಮತ್ತೊಮ್ಮೆ ವಿಲನ್ ಆದವನು ಪುನಃ ಡಾರ್ಲಿಂಗ್"
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಕ್ಕಾಗಿ ರೆಸಾರ್ಟ್ ರಾಜಕೀಯ ?
ಸೃಷ್ಟಿಕರ್ತನೇ ನೀನು ಅದೃಶ್ಯನಾಗಿರುವುದು ಬಹಳ ಒಳ್ಳೇಯದೇ ಇಲ್ಲದಿದ್ದರೆ ನಿನ್ನನ್ನು ಮಾರಿಬಿಡ್ತಾರೆ.
ಬಿಬಿಎಂಪಿ ಟಿಕೇಟ್ ಗೆ 50 ಲಕ್ಷ ಬೇಡಿಕೆ ಇಟ್ಟು ಸಿಕ್ಕಿ ಹಾಕ್ಕೊಂಡವನು
ಮೈತ್ರಿಯಾಧಿಪತಿ.
ಇನ್ನು ಏನೇನು ನೋಡಬೇಕೋ ?
- ರಾಜು ಮೌರ್ಯ ದಾವಣಗೆರೆ

No comments:

Post a Comment